ಸಿತಾರೋಂಸೆ ಆಗೇ ಜಹಾಂ ಔರ್ ಭೀ ಹೈ!

ನಕ್ಷತ್ರಗಳಾಚೆಯೂ ಜಗವಿಹುದುಪ್ರೀತಿಗಿನ್ನೂ ಪರೀಕ್ಷೆಗಳು ಹಲವಿಹುದು ಈ ಲೋಕದಲ್ಲಿ ಪ್ರೀತಿಸುವ ಜೀವಿಗಳಿಗೆ ಬರವಿಲ್ಲನೂರಾರು ಕಾರವಾನಗಳು ಇನ್ನೂ ಹಲವಿಹುದು ಇಲ್ಲಿಯ ಸುಗಂಧ – ಕಾಮನೆಗಳಲ್ಲಿ ಕಳೆದುಹೋಗದಿರುಹೂದೋಟಗಳು – ಗೂಡುಗಳು ಇನ್ನೂ ಹಲವಿಹುದು ಒಂದು ನೆಲೆ ಕಳೆದುಕೊಂಡೆಯೆಂದು ಇಲ್ಲಿ ಅಳುವಿಯೇಕೆಅತ್ತು ಗೋಗರೆಯಲು ಜಾಗವಿನ್ನೂ…

ಪ್ರಜಾಸತ್ತೇ..

ಬಿಸಿಲ ಬೇಗೆಗೆ ನಲುಗಿಸೋತ ಹಗರೆಯ ಮಗುನೆಲಕ್ಕೊದ್ದಾಗಮರಳುಗಾಡಿನಲ್ಲಿಉಕ್ಕಿದ ಸಿಹಿನೀರ ಬುಗ್ಗೆಚಿನ್ನದ ಹೆದ್ದಾರಿಗಳಲ್ಲಿಉಕ್ಕುವುದಿಲ್ಲ ಜೀತದಾಳುಗಳೊಡನೆಮೋಸೆಸನುಬಂಧ ವಿಮುಕ್ತಿಯತ್ತ ನಡೆದಾಗಸಾಗರವೇ ಬಿರಿದು ದಾರಿ ತೋರಿದ ಗಳಿಗೆಇನ್ನೊಮ್ಮೆ ಬರುವುದಿಲ್ಲ ವಿಶ್ವಾಸಿಗರೇ ಕೇಳಿ‘ಸಿರಿವಂತನಿಗೆ ಸ್ವರ್ಗದ ದಾರಿಒಂಟೆಯನ್ನು ಸೂಜಿಯ ಕಣ್ಣೊಳಗೆತುರುಕಿದಷ್ಟೇ ಸುಲಭ’ಆದರೂ ಬಡವರ ಕಡೆಗೆರೈಲುಗಳು ಧಾವಿಸುವುದಿಲ್ಲವಂದೇ ಭಾರತ –…

ಜಾವೆದ್ ನಾಮಾ

ನಿನ್ನ ಹೃದಯದೊಳಗೊಂದುಸ್ವಜ್ಞಾನದ ದೃಷ್ಟಿ ತೆರೆದಿದೆಯೆಂದರೆಆ ಹೂವುಗಳ ಮೌನಗಳಿಗೆ ಮಾತಾಗುಪ್ರೀತಿಯ ಒಂದಿಷ್ಟು ಪದಗಳಾಗು ಈ ಪ್ರೀತಿಯೆಂಬ ಜಗದಲ್ಲಿಪುಟ್ಟ ತಾವು ಹುಡುಕುಈ ನವ್ಯ ಯುಗದಲ್ಲಿರಮ್ಯ ಹಗಲಿರುಳ ಹುಡುಕು ಪಶ್ಚಿಮದ ಕಲೆಗಾರರಮನೆಯ ಪರಿಚಾರಕನಾಗಬೇಡಭಾರತದ ನೆಲದಲ್ಲಿಮಧುಶಾಲೆಯ ಸುಧೆಯ ಹರಿಸು ಸಾಹಿತ್ಯವೃಕ್ಷದ ರೆಂಬೆಕೊಂಬೆಯಾಗಿರುವೆಕವಿತಾಸಾರ ಹರಿಯುತಿದೆ ನಿನ್ನ…

ಝಹರಾ, ಬೆಳಗಿನ ತಾರೆ(ವೀನಸ್ -ಶುಕ್ರ)

ಈ ಸೂರ್ಯ ಚಂದ್ರರ ಒಡನಾಟದಸುಖವನ್ನು ಬಿಟ್ಟು ಬಿಡಲೇಬೆಳಗಿನ ಸಂದೇಶವ ಸಾರುವಈ ಸೇವೆಯನು ತ್ಯಜಿಸಿ ಬಿಡಲೇ ಈ ನಕ್ಷತ್ರಗಳ ಲೋಕದಲ್ಲಿಬದುಕುವುದು ನನಗೆ ಹೇಳಿದ್ದಲ್ಲಈ ಶಿರವನೇರುವುದಕ್ಕಿಂತಭುವಿಯ ಪಾದಕ್ಕಿಳಿಯುವುದೆ ಒಳಿತು ಈ ಆಗಸವಿದೇನು? ಯಾರೊಬ್ಬರೂಬದುಕಲಾರದ ನಾಡುಮುಂಜಾವಿನ ಬಿಳಿ ಬೆಳಕಿನಾ ದಾವಣಿಯೇಶವ ವಸ್ತ್ರವಾಗುತಿದೆಯೆನಗೆ !…

ಸದಾ – ಏ – ದರ್ದ್

ದ್ವೇಷ ಬೇಗೆಯಲಿ ದಹಿಸುತಿರುವೆಬರಿದಾಗಿದೆ ಬದುಕುವಾಸೆಯಿಲ್ಲಿ,ಮುಳುಗಿಸಿಬಿಡು ಓ ಗಂಗಾ ನದಿಯೆಆ ನಿನ್ನ ಪ್ರಕ್ಷುಬ್ದ ತರಂಗಗಳಲ್ಲಿ! ರಣರಂಗವಾಗಿಹುದುಜನ್ಮ ಭೂಮಿಯಿಲ್ಲಿಅದೆಂತಹಾ ಬಾಂಧವ್ಯ!ವಿರಹ ಬಂದು ಕುಳಿತಿಹುದುಪ್ರೇಮದಂಗಳದಲ್ಲಿ! ಪ್ರೀತಿಯೇ ಸಿಡಿದೆದ್ದಿಹುದುದ್ವೇಷಕ್ಕೆ ಎದುರಾಗಿಒಂದೇ ಹೊಲದೊಳಗೆಫಸಲುಗಳು ಕಾದಾಡುತಿಹವು ಸ್ನೇಹ ತಂಗಾಳಿ ಬೀಸಲಿಲ್ಲವೆಂದೂಆ ಹೂದೋಟದಲ್ಲಿಮೈನಾ ಹಕ್ಕಿಯ ಹಾಡೂಕೇಳಿ ಬರುವುದೆಂತು ಈ…

ಮುಸಾಫಿರ್

ಬುದ್ಧಿವಂತಿಕೆ ಮತ್ತು ಸಂಸ್ಕಾರ ಇರುವ ಮನುಷ್ಯನಿಗೆಮನೆಯ ಗೋಡೆಗಳ ನಡುವೆ ಆರಾಮ ಶೋಭೆಯಲ್ಲ ಹಾಗಾಗಿ, ಯಾತ್ರೆ ಹೊರಡುತೊರೆದು ನಿನ್ನ ವಿರಾಮದ ಮನೆಯಸಿಕ್ಕೇ ಸಿಗುತ್ತದೆನೀನು ತೊರೆದುದುದರ ಬದಲಿ ನಿವಾಸ ಮತ್ತು ಸೆಣಸಾಡುದಿಕ್ಕಾಪಾಲಾದ ಯಾತ್ರೆಯುದ್ದಕ್ಕೂಬದುಕಿನ ಮಾಧುರ್ಯವಿರುವುದೇಕಷ್ಟ ಕೋಟಲೆಗಳಲ್ಲಿಮತ್ತದರೆದುರು ಸೆಣಸುವುದರಲ್ಲಿ ನಾನು ಕಂಡಿದ್ದೇನೆ,ನಿಂತ ನೀರು…

ಸ್ಪೈನ್ – ಅಂದ್ಯುಲೂಸಿಯಾ

ಉರ್ದು ಕವಿ ಅಲ್ಲಾಮ ಇಕ್ಬಾಲರು 1933 ರಲ್ಲಿ ಸ್ಪೇನಿಗೆ ಬೇಟಿ ನೀಡಿದ್ದರು. ಆ ಸಮಯದಲ್ಲಿ ಬರೆದಿರುವ ಎರಡು ಕವಿತೆಗಳಲ್ಲಿ ಮಸ್ಜಿದೇ ಕುರ್ತುಬಾ ಮತ್ತು ಹಿಸ್ಪಾನಿಯಾ ಪ್ರಸಿದ್ಧ ಕವಿತೆಗಳಾಗಿವೆ. ಇಲ್ಲಿ ಪ್ರಕಟಿಸಲಾದ ಕನ್ನಡ ಭಾವಾನುವಾದವು ಇಕ್ಬಾಲರು ಸ್ಪೈನ್ ದೇಶದಿಂದ ವಾಪಾಸಾಗುವ…