ಬಶೀರ್ ಬದ್ರ್ ಕವಿತೆಗಳು

ಸೋತುಹೋಗುವರು ಒಂದು
ಮನೆ ಕಟ್ಟುವಷ್ಟರಲ್ಲೇ ಜನರು
ದಣಿಯಲಿಲ್ಲವಲ್ಲೋ ನೀನು
ಇಡೀ ಊರನ್ನೇ ಸುಟ್ಟರೂ !

ಪಾರಿವಾಳಗಳ ಅಸಹಾಯಕತೆಯಿದು
ಇದನ್ನೂ ಹೇಳಲಾರವು
ಯಾರು ಇರಿಸುತ್ತಿರುವರು ಸರ್ಪಗಳನ್ನು
ತಮ್ಮ ಗೂಡಿನಲ್ಲಿ !

ಸದ್ದು ಮಾಡುವ ಕಲ್ಲುಗಳನ್ನು
ಎದೆಯೆಂದು ತಿಳಿಯುವರು ಜನರು
ಜನುಮವೇ ಕಳೆದು ಹೋಗುವುದು
ಎದೆಯನ್ನು ಹೃದಯವನ್ನಾಗಿಸುವುದರಲ್ಲಿ !


ವಿಲಕ್ಷಣ ಹಣತೆ ನಾನು
ಹಗಲಿರುಳೆನ್ನದೆ ಉರಿಯುತ್ತಲಿರುವೆ
ಆ ಗಾಳಿಗೆ ಆರಿಸಲು ಹೇಳಿ
ದಣಿದುಹೋಗಿರುವೆ ನಾನು

ಧೂಳು ಮಾತ್ರವಲ್ಲ ಆದಿಮಕಾಲದ ಹಳೆಯದಾರಿಯಾಗಿರುವೆ ನಾನು
ನಿನ್ನೆಯಷ್ಟೇ ಇಲ್ಲಿಂದ ಹಾದುಹೋಗಿದೆ
ಒಂದು ಕಾರವಾನು

ನಿದ್ದೆಗೆ ಜಾರಿದಾಗ ನಿಮ್ಮ ಕೈಗಳಿಂದ ಮುಚ್ಚಿಬಿಡಿ ನನ್ನ ಕಣ್ಣುಗಳನ್ನು
ಓದುತ್ತಲೇ ನಿದ್ದೆಗೆ ಜಾರಿಬಿಡುವಂತಹಾ
ಒಂದು ಕಥೆಯಷ್ಟೆ ನಾನು

ಉರ್ದು ಮೂಲ: ಬಶೀರ್ ಬದ್ರ್
ಕನ್ನಡಕ್ಕೆ ಪುನೀತ್ ಅಪ್ಪು




Leave a Reply

*