ಹಳದಿ ನಾಯಿ

ಭಾಗ-2

ಆ ಹಿರಿಯರು ತಮ್ಮ ಪ್ರವಾಸದಿಂದ ಹಿಂತಿರುಗಿದಾಗ ರಸ್ತೆಯ ಪಕ್ಕದಲ್ಲಿ ದೈವಿ ಕಾಂತಿಯುಳ್ಳ ಮುಖಮುದ್ರೆಯ ವ್ಯಕ್ತಿಯೊಬ್ಬ ಚಪ್ಪಲಿ ಹೊಲಿಯುತ್ತಿದ್ದನು ಮುಂದೆ ಸಾಗಿ ನೋಡಿದರೆ, ಅಲ್ಲೊಂದು ಗೋಷ್ಠಿ ನಡೆದಿತ್ತು. ನಗರದ ವಿದ್ಯಾವಂತ ಜನರು ಅಲ್ಲಿ ಸೇರಿದ್ದರು. ಅದರಲ್ಲಿ ಒಬ್ಬ ವ್ಯಕ್ತಿಯು ಅಪ್ರಯೋಜಕ ವಿಷಯಗಳ ಕುರಿತು ಪ್ರವಚನ ನೀಡುತ್ತಿದ್ದನು. ಇದನ್ನು ಕಂಡು ಆ ಹಿರಿಯರು ನಖಶಿಖಾಂತ ಕೆಂಡಮAಡಲರಾದರು.
‘ಹೇ ನಗರವೇ, ನಿನ್ನ ಸರ್ವನಾಶವಾಗಲಿ, ನೀನು ಜ್ಞಾನಿಯನ್ನು ಚಮ್ಮಾರನನ್ನಾಗಿಸಿದೆ ಹಾಗೂ ಚಮ್ಮಾರನನ್ನು ಜ್ಞಾನಿಯ ಸ್ಥಾನದಲ್ಲಿ ಕೂಡಿಸಿದೆ. ತದನಂತರ ಅವರೂ ಚರ್ಮಕಾರಿಕೆ ಸಾಮಗ್ರಿಗಳನ್ನು ಖರೀದಿಸಿ, ಆ ಜ್ಞಾನಿಯ ಪಕ್ಕದಲ್ಲಿ ಕುಳಿತು ಚಪ್ಪಲಿ ಹೊಲೆಯುವ ಕಾಯಕ ಪ್ರಾರಂಭಿಸಿದರು.
ಈ ತರ್ಕವನ್ನು ಕೇಳಿ ನಾನು ಪ್ರಶ್ನಿಸಿದೆ
ಯಾ ಶೇಖ್! ಜ್ಞಾನಿಯ ಲಕ್ಷಣವೇನು?
ನುಡಿದರು: ಅವನಲ್ಲಿ ಲೋಭ ಇರಬಾರದು.
ನಾನು ಪ್ರಶ್ನಿಸಿದೆ.
ಲೋಕಾಕಾಂಕ್ಷೆ ಯಾವಾಗ ಉತ್ಪತ್ತಿಯಾಗುತ್ತದೆ.
ನುಡಿದರು: ಜ್ಞಾನದ ಅಧೋಗತಿಯಾದಾಗ!
ಅರಿಕೆ ಮಾಡಿಕೊಂಡೆ: ಜ್ಞಾನದ ಅಧೋಗತಿ ಯಾವಾಗ ಆಗುತ್ತದೆ.
ಉತ್ತರಿಸಿದರು: ಯಾವಾಗ ದರ್ವೇಷನು ಸವಾಲು ಹಚ್ಚಿ ಬೇಡುತ್ತಾನೆ. ಕವಿಯು ಫಲಾಪೇಕ್ಷೆಯಾದಾಗ, ಹುಚ್ಚನು ಬುದ್ಧಿವಂತ ಎನಿಸಿಕೊಂಡಾಗ, ಜ್ಞಾನಿಯು ವ್ಯಾಪಾರಿಯಾದಾಗ ಹಾಗೂ ಬುದ್ಧಿಜೀವಿ ಲಾಭ ಗಳಿಕೆಯಲ್ಲಿ ತೊಡಗಿದಾಗ ಇದೇ ಸಮಯದಲ್ಲಿ ವ್ಯಕ್ತಿಯೊಬ್ಬ ಏರಿದ ದನಿಯಲ್ಲಿ ಕವನವನ್ನು ಹಾಡಿದ್ದು ಕೇಳಿಸಿತು. “ಆ ದೂರದ ನಗರದಲ್ಲಿ ಬರಗಾಲ ಸ್ಥಿತಿ ಉಂಟಾಗಿದೆ, ಯಾಕೆಂದರೆ ಸ್ನೇಹಿತರು ಪ್ರೇಮಭಾವ ತ್ಯಜಿಸಿದರು.” ಅವರು ಆ ಗಾಯಕನನ್ನು ಕರೆದರು. ಅವನನ್ನು ಆ ಕವನ ಸಾಲನ್ನು ಮತ್ತೆ ಹಾಡಲು ಒತ್ತಾಯಿಸಿದರು. ಅವನು ಸುಶ್ರಾವ್ಯವಾಗಿ ಕವನ ಸಾಲನ್ನು ವಾಚಿಸಿದರು. ಅವರಿಗೆ ಚಿಂತನೆಯ ಸ್ಥಿತಿಯು ಆವರಿಸಿತು. ನಂತರ ಅವರ ತಲೆ ಎತ್ತಿ ಈ ತರ್ಕವನ್ನು ಪ್ರಸ್ತಾಪಿಸಿದರು.
ಒಂದು ಊರಿನಲ್ಲಿ ಒಬ್ಬ ಉದಾರಿ ಇದ್ದನು. ಅವನ ದಾನಗುಣದ ಚರ್ಚೆ ಎಲ್ಲೆಡೆ ವ್ಯಾಪಿಸಿತ್ತು. ಅವನ ನಗರದಲ್ಲಿ ಒಬ್ಬ ದರ್ವೇಷ್, ಒಬ್ಬ ಕವಿ, ಒಬ್ಬ ಪಂಡಿತ ಹಾಗೂ ಒಬ್ಬ ಬುದ್ಧಿಜೀವಿ ಇದ್ದರು. ದರ್ವೇಷನಿಗೆ ಸತತವಾಗಿ ಮೂರು ದಿನದಿಂದ ಉಪವಾಸ ಆವಸ್ಥೆ ಬಂದಿತ್ತು. ಆಗ ಅವನು. ಆ ಉದಾರಿಯ ಬಳಿಗೆ ಹೋಗಿ ಸವಾಲು ಹಚ್ಚಿ ಬೇಡಿದನು. ಉದಾರಿಯು ಅವನ ಬೇಡಿಕೆಯನ್ನು ಪೂರ್ಣಗೊಳಿಸಿದನು. ಪಂಡಿತನ ಪತ್ನಿಯು ದರ್ವೇಷನ ಸಮೃದ್ಧಿಯ ಈ ಸ್ಥಿತಿ ನೋಡಿ, ತನ್ನ ಪತಿಗೆ ನಿಮ್ಮ ಜ್ಞಾನದ ಪ್ರಯೋಜನವೇನೆಂದು ಅವನನ್ನು ವ್ಯಂಗವಾಡಿದಳು. ನಿಮಗಿಂತ ಆ ದರ್ವೇಷನು ಉತ್ತಮನಾಗಿದ್ದಾನೆ. ಉದಾರಿಯು ಸಂಪತ್ತಿನಿAದ ಅವನನ್ನು ಸಮೃದ್ಧಗೊಳಿಸಿದ್ದಾನೆ. ಆಗ ಪಂಡಿತನು ಉದಾರಿಯ ಬಳಿ ಹೋಗಿ ಬೇಡಿಕೆ ಇಟ್ಟನು. ಉದಾರಿಯು ಅವನಿಗೆ ಸಾಕಷ್ಟು ಇನಾಮನ್ನು ನೀಡಿ ಕಳುಹಿಸಿದನು. ಬುದ್ಧಿ ಜೀವಿಯು ಇವರಿಬ್ಬರಿಗಿಂತಲೂ ಅಧಿಕ ಸಾಲಗಾರನಾಗಿದ್ದನು. ದರ್ವೇಷ್ ಹಾಗೂ ಪಂಡಿತರಿಬ್ಬರೂ ಉದಾರಿಯ ಮನೆಬಾಗಿಲಿಂದ ತಮ್ಮ ಆಕಾಂಕ್ಷೆಗಳನ್ನು ಪೂರೈಸಿಕೊಂಡು ಬಂದದ್ದನ್ನು ಕಂಡ ಅವನೂ ಉದಾರಿಯ ಮನೆಗೆ ತಲುಪಿ, ತನ್ನ ಸ್ಥಿತಿಯನ್ನು ವಿವರಿಸಿದನು. ಉದಾರಿಯು ಅವನನ್ನೂ ಉತ್ತಮ ಉಡುಪು ಹಾಗೂ ಗೌರವ ನೀಡಿ ಕಳುಹಿಸಿದನು. ಇದನ್ನು ಕೇಳಿದ ಕವಿಗೂ ತನ್ನ ಕಾವ್ಯ ವಾಚನ ಮಾಡಿ, ಸೂಕ್ತ ಇನಾಮು ಪಡೆಯುವ ಹಂಬಲ ಹುಟ್ಟಿತು. ಉದಾರಿಯ ಅವನ ಕಾವ್ಯ ವಾಚನ ಕೇಳಿ, ಸಂತುಷ್ಟನಾಗಿ ಅವನಿಗೆ ಸಾಕಷ್ಟು ಧನವನ್ನು ನೀಡಿ ಕಳುಹಿಸಿದನು.
ದರ್ವೇಷನಿಗೆ ಅದೆಷ್ಟು ದೊರಕಿತ್ತು, ಅಷ್ಟರಲ್ಲೇ ತೃಪ್ತನಾಗಿ ಮತ್ತೆ ದುರ್ಗತಿ ಬಾರದಂತೆ, ಜಿಪುಣತನದಿಂದ ಹಣವನ್ನು ವ್ಯಯಿಸಿದ. ಆದರೆ ಪಂಡಿತನು ದೊರೆತ ಸಂಪತ್ತಿನಿAದ ಕೆಲವು ಒಂಟೆಗಳನ್ನು ಹಾಗೂ ವ್ಯಾಪಾರ ಸರಕನ್ನು ಖರೀದಿಸಿ, ವ್ಯಾಪಾರ ಕೇಂದ್ರವಾಗಿದ್ದ ಅಸ್‌ಫಹಾನ್ ಕಡೆ ವರ್ತಕ ಕಾರವಾನ್ ಜತೆ ಹೊರಟನು. ಈ ವ್ಯಾಪಾರಾ ಪಯಣದಲ್ಲಿ ಅವನಗೆ ತುಂಬಾ ಲಾಭವಾಯಿತು. ಮುಂದೆ ಸಾಗಿ ಖರಾಸಾನ್ ತಲುಪಿದನು. ಬುದ್ಧಿಜೀವಿಗೆ ಸಾಲ ಪಡೆಯುವ ಹಾಗೂ ತೀರಿಸುವ ಅನುಭವವಿತ್ತು. ಆದುದರಿಂದ ಧನವನ್ನು ಬಡ್ಡಿಯ ವ್ಯವಹಾರದಲ್ಲಿ ತೊಡಗಿಸಿದನು. ಆದರೆ ಕವಿಯು ಆಲಸಿಯಾಗಿದ್ದು, ಇನ್ನೂ ಕೆಲವು ಪ್ರಶಂಷಾ ಕವನಗಳು, ಕೆಲವು ವಿಲಾಪದ ಕವನಗಳನ್ನು ಬರೆದು ಇನ್ನಷ್ಟು ಇನಾಮು ಪ್ರಾಪ್ತಿಸಿದನು. ಒಟ್ಟಾರೆ ದರ್ವೇಷ್, ಪಂಡಿತ, ಬುದ್ದಿಜೀವಿ ಹಾಗೂ ಕವಿ- ಈ ನಾಲ್ವರು ಧನಿಕರಾದರು. ಆದರೆ ವಾಸ್ತವಿಕವಾಗಿ ದರ್ವೇಷನ ದರ್ವೇಷಿತನದ ಗೌರವ, ಪಂಡಿತನ ಜ್ಞಾನ, ಬುದ್ಧಿಜೀವಿಯ ಬುದ್ಧಿವಂತಿಕೆ ಹಾಗೂ ಕವಿಯ ಕವನ ಪಾವಿತ್ರö್ಯತೆ ಹೊರಟು ಹೋಯಿತು.


ಶೇಖರು ಈ ವೃತ್ತಾಂತವನ್ನು ಹೇಳಿ ಮಾತಿಗೆ ವಿರಾಮ ನಿಡದರು. ನಂತರ ಮತ್ತೆ ನುಡಿದರು. ಹಜ್ರತ್ ಶೇಖ್ ಸಾದಿಯವರೂ ಸಹ ವಾಸ್ತವವನ್ನೇ ನುಡಿದಿದ್ದಾರೆ. ನಾನು ಶೇಖ್ ಕಬುತರ್ ಸಹ ವಾಸ್ತವವನ್ನೇ ನುಡಿಯುತ್ತೇನೆ. ಅದೇನೆಂದರೆ ದಮಿಷ್ಕ್ ನಗರದಲ್ಲಿ ಪ್ರೇಮದ ಉಪೇಕ್ಷೆ ಎರಡೂ ರೀತಿಯಿಂದ ಆಯಿತು. ಬಹಳ ಹೊತ್ತು ಒಂದು ಕವನದ ಸಾಲನ್ನು ಗುನುಗುನಿಸಹತ್ತಿದರು. ಹಾಗೂ ಆ ದಿನದ ನಂತರ ಮತ್ತೆ ಯಾವುದೇ ಮಾತನ್ನು ಆಡಲಿಲ್ಲ. ನನಗೆ ಅರಿವಾಯಿತು- ಶೇಖರ ಸ್ವಭಾವವೇಕೋ ಮ್ಲಾನವಾಗಿದೆ. ಹಾಗೂ ಹೃದಯದಲ್ಲಿ ಯಾವುದೋ ಯಾತನೆಯಿದೆ. ಕವನದ ಸಾಲನ್ನು ಕೇಳುತ್ತಿದ್ದಂತೆ ವಿಚಿತ್ರ ಸ್ಥಿತಿಯಲ್ಲಿರುತ್ತಿದ್ದರು. ಬಹಳ ಪ್ರಭಾವಿತರಾಗಿದ್ದರು. ಅತೀವ ಕನಿಕರಪಡುತ್ತಿದ್ದರು. ಹಾಗೂ ತಮ್ಮ ನಿಲುವಂಗಿ ಹರಿದುಕೊಳ್ಳುತ್ತಿದ್ದರು. ಅವರು ಕೇಳಿದ ಅಂತಿಮ ಕವನದ ಸಾಲಿನ ವೃತ್ತಾಂತದ ಕುರಿತೂ ಪ್ರಸ್ತಾಪಿಸುತ್ತೇನೆ.
ಆ ದಿನದ ರಾತ್ರಿಯೆಲ್ಲಾ ಅವರು ಉದ್ವಿಗ್ನತೆಯ ಸ್ಥಿತಿಯಲ್ಲಿದ್ದರು. ರಾತ್ರಿ ಎಚ್ಚರವಾಗಿರುವುದು ಅವರ ರೂಢಿಯಾಗಿತ್ತು. ಆದರೆ ಈ ರಾತ್ರಿ ಅವರು ಒಂದು ಕ್ಷಣವೂ ವಿಶ್ರಾಂತಿ ಪಡೆಯಲಿಲ್ಲ. ನಾನು ಇದರ ಕುರಿತು ವಿಚಾರಿಸಿದಾಗ ಯಾತ್ರಿಕರಿಗೆ ನಿದ್ದೆಯೆಲ್ಲಿ? ಎಂದು ಉತ್ತರಿಸಿದರು, ದೈವಿಸ್ಮರಣೆ ಮತ್ತು ಧ್ಯಾನದಲ್ಲಿ ನಿರತರಾದರು. ಇನ್ನೂ ಬೆಳಗಾಗುವದರಲ್ಲಿತ್ತು. ಅವರು ಬೆಳಗಿನ ನಮಾಜಿನ ಕರ್ತವ್ಯವನ್ನು ನಿರ್ವಹಿಸಿದರು. ಆಗ ಒಬ್ಬ ಫಕೀರನು ಸುಶ್ರಾವ್ಯವಾಗಿ ಕವನದ ಈ ಸಾಲನ್ನು ಹಾಡುತ್ತಾ ಸಾಗುತ್ತಿದ್ದನು.

ಆಕಾಂಕ್ಷೆಯ ಹಸ್ತವನು ಮುಂದೆ ಮಾಡಿ ಮತ್ತೇನು ಬೇಡಲಿ ಆ ದಾತನಲಿ
ದಣಿದು ಮುದುಡಿ ಮಲಗಿದೆ, ಆ ಕೈಯು ನನ್ನ ತಲೆಯ ಕೆಳಗಡೆ
ಇದನ್ನು ಕೇಳಿ ಅವರ ಹೃದಯು ತುಂಬಿ ಬಂದು, ತನ್ಮಯ ಭಾವ ಆವರಿಸಿತು. ಹಾಡಲು ಕೋರಿದರು. ಅವನೂ ಆ ಹಾಡನ್ನು ತನ್ಮಯವಾಗಿ ಮತ್ತೆ ಹಾಡಿದನು. ಅವರು ತಮ್ಮ ಉಡುಪನ್ನು ಹರಿದು ಹಾಕಹತ್ತಿದರು. ಅವನನ್ನು ಮತ್ತೇ ಆ ಕವನದ ಸಾಲನ್ನು ಹಾಡಲು ಕೋರಿದರು. ಫಕೀರನು ಆ ಸಾಲನ್ನು ಮತ್ತೇ ಪುನರಾವರ್ತಿಸಿದನು. ಅವರ ಹೃದಯವು ಮತ್ತೆ ತುಂಬಿ ಬಂದಿತು. ದುಃಖಭರಿತ ಸ್ವರದಲ್ಲಿ ನುಡಿದರು- ವಿಷಾದವಿದೆ, ಆ ಕೈಗಳ ಬಗ್ಗೆ, ಯಾವುದರ ನೆರವಿನಿಂದ ಅವರು ಬೇಡಿದ್ದನ್ನು ಪಡೆದರು. ಅವರು ತಮ್ಮ ಕೈಗಳತ್ತ ದೃಷ್ಟಿ ಹಾಯಿಸಿದರು. ಮತ್ತು ನುಡಿದರು, ಹೇ ನನ್ನ ಕೈಗಳೇ, ಸಾಕ್ಷಿಯಾಗಿರಬೇಕು ನೀವು, ಶೇಖ್ ಕಬುತರ್‌ನು ಎಂದಿಗೂ ನಿಮ್ಮನ್ನು ಈ ಅವಮಾನಕ್ಕೆ ಗುರಿಪಡಿಸಲಿಲ್ಲ. ಆ ಫಕೀರನನ್ನು ಈ ಹಿಂದೆ ನಾವು ಎಂದು ನೋಡಿರಲಿಲ್ಲ ಹಾಗೂ ಕೇಳಿರಲಿಲ್ಲ. ಅವನು ಒಳಗೆ ಬಂದನು ಹಾಗೂ ಶೇಖ್‌ರನ್ನು ಉದ್ದೇಶಿಸಿ ನುಡಿದನು ಹೇ ಉಸ್ಮಾನ್ ಈಗ ಸಾಯಬೇಕು, ಯಾಕೆಂದರೆ ಈಗ ಕೈಗಳು ಬೇಡುವ ಹಂಬಲವನ್ನು ಹೊಂದಿದೆ.
ಶೇಖರು ಇದನ್ನು ಕೇಳಿ ನುಡಿದರು-
ಹಾಂ! ನಾನು ಸಾಯುವೆ
ನಂತರ ಅವರು ತಲೆದಿಂಬಾಗಿ ಇಟ್ಟಿಗೆಯನ್ನು ಇಟ್ಟುಕೊಂಡು ಒಂದು ಚಾದರನ್ನು ಹೊದ್ದು ಕೊಂಡು ಮಲಗಿದರು, ಆ ಫಕೀರ್ ಎಲ್ಲಿಂದ ಬಂದಿದ್ದನು ಆ ಕಡೆ ಮರಳಿ ಹೋದನು. ನಾನು ಅವರ ಕೇಶರಾಶಿಯಲ್ಲಿ ಬೆರಳಾಡಿಸುತ್ತ ಕುಳಿತುಕೊಂಡೆ ಆಗ ನನಗೆ ಚಾದರಿನ ಒಳಗಿನಿಂದ ಯಾವುದೇ ಜೀವಿ ರೆಕ್ಕೆ ಬಡಿಯುತ್ತಾ ಹೊರಬಂದAತೆ ಭಾಸವಾಯಿತು. ನಾನು ಚಾದರಿನ ಒಂದು ಕೊನೆಯನ್ನು ಸರಿಸಿದೆ. ಆಗ ಚಾದರಿನ ಒಳಗಿನಿಂದ ಒಂದು ಬಿಳಿ ಪಾರಿವಾಳ ರೆಕ್ಕೆ ಬಡಿಯುತ್ತಾ ಹೊರಬಂದಿತು. ಕ್ಷಣಾರ್ಧದಲ್ಲೆ ಅದು ಬೃಹದಾಕಾರವಾಗಿ ಬೆಳೆದು ಆಕಾಶದಲ್ಲಿ ಅದೃಶ್ಯವಾಯಿತು. ನಾನು ಕೌತುಕಗೊಂಡು ಚಾದರಿನ ಇನ್ನೊಂದು ಕೊನೆಯನ್ನು ಸರಿಸಿ, ಶೇಖರ ಮುಖದ ಮೇಲೆ ದೃಷ್ಟಿ ಹಾಯಿಸಿದೆ. ಅವರ ಮುಖದ ಮೇಲೆ ದೈವಿಕ ಕಾಂತಿಯಿತ್ತು. ಬಹುಶಃ ಅವರು ಚಿರನಿದ್ರೆಯಲ್ಲಿ ಜಾರಿದಂತೆ ತೋರಿತು. ನನ್ನಲ್ಲಿ ದಿಜ್ಮೂಢತನ ಆವರಿಸಿತು. ನನಗೆ ತಲೆ ಸುತ್ತು ಬಂದAತಾಗಿ, ಪ್ರಜ್ಞಾಹೀನನಾದೆ.


ಶೇಖರ ಮೃತ್ಯವು ನನಗೆ ಎಂತಹ ಪ್ರಭಾವ ಬೀರಿತೆಂದರೆ, ನಾನು ಒಂದು ಕೋಣೆಯಲ್ಲಿ ಏಕಾಂಗಿಯಾಗಿ ಬಂಧಿತನಾದೆ. ಜಗದ ಬಗ್ಗೆ ತಾತ್ಸಾರ ಉಂಟಾಗಿತ್ತು. ಸಹಲಿಂಗಿಗಳ ಜತೆ ಬೆರೆಯುವ ಇಚ್ಛೆ ಅಳಿದು ಹೋಗಿತ್ತು. ಅದೆಷ್ಟು ದಿನ ನಾನು ಒಂದೇ ಕೋಣೆಯಲ್ಲಿ ಅಜ್ಞಾತವಾಸವಾಗಿದ್ದೆ, ಆದರೆ ಒಂದು ರಾತ್ರಿ ಶೇಖರು- ಅಲ್ಲಾಹನು ಅವರ ಗೋರಿಯನ್ನು ಪ್ರಕಾಶದಿಂದ ಬೆಳಗಿಸಲಿ- ನನ್ನ ಸ್ವಪ್ನದಲ್ಲಿ ಬಂದರು. ಅವರು ಮೇಲೆ ದೃಷ್ಟಿ ಹಾಯಿಸಿದರು. ಆಗ ಕೋಣೆಯ ಸೂರು ತೆರೆದುಕೊಂಡಿತು. ಹಾಗೂ ಆಕಾಶವು ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ಈ ಕನಸನ್ನು ನಾನು ಶೇಖರ ಆದೇಶವೆಂದು ಭಾವಿಸಿದೆ ಹಾಗೂ ಮರುದಿನವೇ ನನ್ನ ಕೋಣೆಯಿಂದ ಹೊರಬಂದೆ.


ಅದೆಷ್ಟು ದಿನ ನಾನು ಕೋಣೆಯಲ್ಲಿ ಏಕಾಂತವಾಸಿಯಾಗಿದ್ದೆ ನನಗೆ ತಿಳಿಯದು. ಹೊರ ಬಂದರೆ ಇಡೀ ಲೋಕವೇ ಬದಲಾದಂತೆ ತೋರುತ್ತಿತ್ತು. ಬಜಾರಿಯಲ್ಲಿ ಸುತ್ತಿದಾಗ ಅಲ್ಲಿಯ ಆಡಂಬರ ಕಣ್ಣು ಕೋರೈಸುವಂತಿದ್ದು, ನಾನು ಈ ಹಿಂದೆ ಎಂದೂ ನೋಡದೇ ಇದ್ದಂತ ನೋಟವಿತ್ತು. ಲಕಲಕನೆ ಹೊಳೆಯುವ ಶುಭ್ರ ಅಂಗಡಿಗಳು, ಸರಾಫಿನ ಎದುರು ಸಮನಾಂತರವಾಗಿ ಇನ್ನೊಬ್ಬ ಸರಾಫ್. ಸಾವಿರಾರುಗಳು ವಹಿವಾಟು ಕ್ಷಣಾರ್ಧದಲ್ಲಿ ಆಗುತ್ತಿತ್ತು. ಧನದ ಹೊಳೆ ವರ್ತಕರಿಗೆ ದೈವದಂತಿರುವAತೆ ಕಂಡಿತು. ನಾನು ಪಿಳಿ ಪಿಳಿ ಕಣ್ಣು ಬಿಟ್ಟು ನೋಡಿದೆ. ಹೇ ದೇವರೆ, ಇದು ವಾಸ್ತವ ಲೋಕವೇ ಅಥವಾ ಕನಸನ್ನು ಕಾಣುತ್ತಿದ್ದೆನೆಯೇ? ನಾನು ಯಾವ ನಗರಕ್ಕೆ ಬಂದಿದ್ದೇನೆ ನನಗೆ ತಿಳಿಯದಾಯಿತು? ಆಗ ನಾನು ಯೋಚಿಸಿದೆ, ಶೇಖರ ಇತರ ಅನುಯಾಯಿಗಳು ಹಾಗೂ ಸಹ ಸೂಫಿ ಸೋದರರನ್ನು ಭೇಟಿಯಾಗಬೇಕು. ಅವರ ಸ್ಥಿತಿ-ಗತಿ ಹಾಗೂ ಕ್ಷೇಮ ಸಮಾಚಾರ ವಿಚಾರಿಸಬೇಕೆಂದು ತೋರಿತು. ಶೇಖರಿಂದ ಪ್ರಭಾವಿತನಾಗಿ ತನ್ನ ಮನೆಯನ್ನೇ ಧ್ವಂಸ ಮಾಡಿದ್ದ ಸಯ್ಯದ್ ರಜಿ಼ಯ ವಿಳಾಸವನ್ನು ವಿಚಾರಿಸಿದೆ. ಹುಡುಕುತ್ತಾ, ಹುಡುಕುತ್ತಾ ನಗರದ ಒಂದು ಸುಂದರ ವಸತಿ ಪ್ರದೇಶಕ್ಕೆ ತಲುಪಿದೆ. ಅಲ್ಲಿ ಒಂದು ಭವನದ ಸಮೀಪ ಬಂದೆ. ಜನರು ಇದೇ ಸಯ್ಯದ್ ರಜಿ಼ಯ ಮನೆಯೆಂದು ಹೇಳಿದರು. ನಾನು ಆ ಭವ್ಯ ಭವನವನ್ನು ಕಂಡು ನಂಬದಾದೆ. ದೇವರಾಣೆ, ಹೇ ಜನರೇ, ನೀವು ನನಗೆ ಸುಳ್ಳು ಹೇಳುತ್ತಿದ್ದೀರಿ. ಸಯ್ಯದ್ ರಜಿ಼ ಮನೆ ಕಟ್ಟಲಾರ. ನಾನು ಮುಂದೆ ಸಾಗಿದೆ. ನಾನು ಮತ್ತೆ ಅಬು ಮುಸ್ಲಿಂ ಬಾಗ್ದಾದಿಯ ವಿಳಾಸ ಕೇಳಿದೆ. ವ್ಯಕ್ತಿಯೊಬ್ಬ ನನ್ನನ್ನು ನಗರದ ಖಾಜಿಯ ಅರಮನೆ ಸದೃಶ ಕಟ್ಟಡದ ಮುಂದೆ ತಂದು ನಿಲ್ಲಿಸಿದ ಹಾಗೂ ಇದೆ ಅಬು ಮುಸ್ಲಿಂ ಬಾಗ್ದಾದಿಯ ನಿವಾಸವೆಂದು ಹೇಳಿದ. ನಾನು ಆ ಅರಮನೆ ಸದೃಶ ನಿವಾಸವನ್ನು ಚಕಿತನಾಗಿ ನೋಡಿ ಅಬು ಮುಸ್ಲಿಂ ಬಾಗ್ದಾದಿಯ ಉನ್ನತ ಸ್ಥಾನವನ್ನು ಪಡೆದಿದ್ದಾನೆ ಎಂದು ಭಾವಿಸಿದೆ. ನಾನು ಮುಂದೆ ಸಾಗಿ, ಶೇಖ್ ಹಮ್ಜಾನ ವಿಳಾಸ ಕೇಳಿದೆ. ಹುಡುಕುತ್ತಾ ಹುಡುಕುತ್ತಾ, ನಾನು ಒಂದು ಹವೇಲಿಯ ಮುಂದೆ ಬಂದು ನಿಂತೆ. ಅದು ಶೇಖ್ ಹಮ್ಜಾನ ಹವೇಲಿಯೆಂದು ಜನರು ತಿಳಿಸಿದರು. ನಾನು ನುಡಿದೆ. ದೇವರಾಣೆ, ಶೇಕ್ ಹಮ್ಜಾನು ಸೂರನ್ನು ಹೊಂದಿದ್ದಾನೆ, ಹಾಗೂ ನನ್ನಿಂದ ದೂರವಾಗಿದ್ದಾನೆ. ನಾನು ಮುಂದೆ ಸಾಗಿ, ಅಬು ಜಾಫರ್ ಶಿರಾಜಿಯ ವಿಳಾಸವನ್ನು ಕೇಳಿದೆ. ಆಗ ಒಬ್ಬ ವ್ಯಕ್ತಿಯು ನನ್ನನ್ನು ಒಂದು ಚಿನ್ನದ ಅಂಗಡಿಯ ಮುಂದೆ ತಂದು ನಿಲ್ಲಿಸಿದ. ಅಲ್ಲಿ ಬೆಲೆಬಾಳುವ ನೆಲಹಾಸಿನ ಮೇಲೆ, ದಿಂಬಿಗೆ ಆತುಕೊಂಡು ರೇಷ್ಮೆ ವಸ್ತçಧಾರಿಯಾದ ಅಬು ಜಾಫರ್ ಶಿರಾಜಿ ಪವಡಿಸಿದ್ದನು. ಒಬ್ಬ ಸುಂದರ ತರುಣ ಬೀಸಣಿಕೆಯಿಂದ ಗಾಳಿ ಬೀಸುತ್ತಿದ್ದನು. ಆಗ ನಾನು ಅವನ ಮುಂದೆ ಸಾಗಿ ನುಡಿದ “ಹೇ ಅಬು ಜಾಫರ್, ಮಣ್ಣು ಮಣ್ಣಿಗೆ ಪ್ರಿಯವಾಗಿದೆ. ನಾನು ಅವನ ಉತ್ತರಕ್ಕೆ ಕಾಯದೇ ತಿರುಗಿ ನೋಡದೆಯೆ ಹೊರಟು ಬಿಟ್ಟೆ. ದಾರಿಯಲ್ಲಿ ಸಯ್ಯದ್ ರಜಿ಼ ರೇಷ್ಮೆ ವಸ್ತçಧಾರಿಯಾಗಿ ಗುಲಾಮರ ರಕ್ಷಣೆಯಲಿ ಠೀವಿಯಿಂದ ಬರುತ್ತಿರುವುದನ್ನು ಕಂಡೆ. ನನ್ನ ಸಹನೆಯ ಮಿತಿ ಮೀರಿ ಹೋಯಿತು. ನಾನು ಮುನ್ನುಗ್ಗಿ ಅವನ ನಿಲುವಂಗಿಯಲ್ಲಿನ ಭಾರಿ ಕೈಯನ್ನು ಎತ್ತಿ ನುಡಿದೆ, ಹೇ ಕುಲೀನ ಕುಟುಂಬದ ನನ್ನ ಹಳೆಯ ಸ್ಮೃತಿಯೇ, ಹೇ ಸಾದತ್ ವಂಶದ ಶ್ರೇಷ್ಠನೇ, ನೀನು ಸೆಣಬಿನ ಉಡುಪನ್ನು ತೊರೆದು ರೇಷ್ಮೆ ವಸ್ತçಧಾರಣೆ ಮಾಡಿರುವಿಯಾ? ಇದರಿಂದ ಅವನು ಗಲಿಬಿಲಿಗೊಂಡನು. ನಾನು ರೋಧಿಸುತ್ತ ಅಲ್ಲಿಂದ ಕೋಣೆಯ ದಿಕ್ಕಿಗೆ ಹೊರಟೆ. ಕೋಣೆಗೆ ಬಂದು ಬಹಳ ಸಮಯದವರೆಗೆ ಅಳುತ್ತಾ ಕುಳಿತೆ ಹಾಗೂ ನುಡಿದೆ, ದೇವರಾಣೆ! ಇಂದು ನಾನು ಒಂಟಿಯಾಗಿದ್ದೇನೆ.


ಮರುದಿನ ನಾನು ಶೇಖರ ಸಮಾಧಿಗೆ ಭೇಟಿ ನೀಡಿದೆ. ಅಲ್ಲಿ ನಾನು ಹಬೀಬ್ ಬಿನ್ ಯಾಹ್ಯಾ ತಿರ್ಮಿಜಿ಼ಯನ್ನು ಹರಕು ಬಟ್ಟೆ ಹಾಗೂ ಚಾಪೆಯ ಜೊತೆ ಕಂಡೆ. ನಾನು ಅವನ ಪಕ್ಕ ಕುಳಿತುಕೊಂಡೆ. ನಾನುಡಿದೆ- ಹೇ! ಹಬೀಬ್, ನೋಡಿದೆಯಾ, ಜಗವು ಯಾವ ರೀತಿ ಬದಲಾಗಿದೆ. ನಮ್ಮ ಸಹ ಸೂಫಿ ಸಹೋದರರು ಶೇಖರ ತತ್ವಗಳನ್ನು ತ್ಯಜಿಸಿದ್ದಾರೆ. ಹಾಗೂ ಅವರ ಪಂಥದಿAದ ವಿಮುಖರಾಗಿದ್ದಾರೆ. ಇದನ್ನು ಕೇಳಿ, ಅವನ ಮುಖದ ಮೇಲೆ ವಿಷಾದದ ಛಾಯೆ ಹಾಯ್ದು ಹೋಯ್ತು. ತಣ್ಣನೆಯ ನಿಟ್ಟುಸಿರು ಬಿಡುತ್ತಾ ಹೇಳಿದ! ನಿಸ್ಸಂದೇಹವಾಗಿ ಸಹ ಸೂಫಿಗಳು ಶೇಖರ ತತ್ವಗಳನ್ನು ತೊರೆದಿದ್ದಾರೆ ಹಾಗೂ ತಮ್ಮ ಪಂಥದಿAದ ವಿಮುಖರಾಗಿದ್ದಾರೆ. ಆಗ ನಾನುಡಿದೆ ದೀನಾರ್‌ನ ಭಕ್ತರು ಹತರಾಗಲಿ, ದೀನಾರ್‌ನ ಭಕ್ತರು ಹತರಾಗಲಿ.
ಅದೇ ಸಂಜೆ ಅಬು ಮುಸ್ಲಿಂ ಬಾಗ್ದಾದಿಯ ಸೇವಕನು ನನ್ನನ್ನು ಕರೆಯಲು ಬಂದನು, ‘ನಡಿ! ನಿನ್ನ ಮಿತ್ರನು ಕರೆಯುತ್ತಿದ್ದಾನೆ’ ಎಂದು ನುಡಿದನು. ನಾನು ತಲುಪಿದಾಗ ಅಲ್ಲಿ ಹಬೀಬ್ ಬಿನ್ ಯಾಹ್ಯಾನು ಅವನ ಸಾಂಗತ್ಯದಲ್ಲಿ ಕುಳಿತಿರುವುದನ್ನು ಕಂಡನು. ಹಾಗೂ ಅಬು ಖಾಸಿಂ ಖಿಜ್ರಿಯು ನಮ್ಮನು ಶೇಖರ ತತ್ವಭ್ರಷ್ಟರೆಂದು ಹೇಳುತ್ತಾ ಹತರಾಗಲಿ, ಹತರಾಗಲಿ ಎಂಬುದಾಗಿ ಕೂಗುತ್ತಾನೆ ಎಂದು ದೂರಿದನು. ಇದಕ್ಕಾಗಿ ಪ್ರತಿಕ್ರಿಯೆಯಾಗಿ ನಾನು ಹಬೀಬ್ ಬಿನ್ ಯಾಹ್ಯಾನ ಮೇಲೆ ಕೋಪದಿಂದ ದೃಷ್ಟಿ ಹಾಯಿಸಿದೆನು. ನಂತರ ಅಬು ಮುಸ್ಲಿಂ ಬಾಗ್ದಾದಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಿ ನುಡಿದೆ- ಹೇ! ಅಬು ಮುಸ್ಲಿಂ ಪ್ರವಾದಿಗಳು ಏನನ್ನು ನುಡಿದಿರುತ್ತಾರೆ. ಅದು ಪುನರುಚ್ಚಿಸಿರುವುದರಿಂದ ನನ್ನನ್ನು ತಡೆಯುವಿಯಾ? ಅದನ್ನು ಶೇಖರು ಸಹ ಅನೇಕ ಸಲ ಪುನರಾವರ್ತಿಸಿದ್ದಾರೆ. ನಾನು ಪ್ರವಾದಿಯರ ಹದೀಸನ್ನು ಸಂಪೂರ್ಣವಾಗಿ ಉಲ್ಲೇಖಿಸಿದೆ.


“ದೀನಾರ್‌ನ ಭಕ್ತರು ಹತರಾಗಲಿ, ದರ್‌ಹಮ್‌ನ ಭಕ್ತರು ಹತರಾಗಲಿ ಬಹುಮೂಲ್ಯ ಉಡುಪುಧಾರಿಗಳು ಹತರಾಗಲಿ” ಇದೇ ಸಮಯದಲ್ಲಿ ಭೋಜನ ಹಾಸನು ಹಾಸಲಾಯಿತು. ಅದರ ಮೇಲೆ ವಿವಿಧ ಸ್ವಾದಿಷ್ಟ ಖಾದ್ಯಗಳನ್ನು ಇಡಲಾಗಿತ್ತು. ಅಬು ಮುಸ್ಲಿಂ ಬಾಗ್ದಾದಿ ನುಡಿದನು. ‘ಹೇ, ಮಿತ್ರನೇ, ಊಟ ಮಾಡು’ ನಾನು ತಂಪಾದ ನೀರನ್ನು ಕುಡಿದು ಸಂತೃಪ್ತನಾದೆ ಹಾಗೂ ನುಡಿದೆ-
‘ಹೇ! ಅಬು ಮುಸ್ಲಿಂ ಬಾಗ್ದಾದಿ, ಜಗತ್ತು ಹಗಲಾಗಿದೆ. ಅದರಲ್ಲಿ ನಾವು ಉಪವಾಸ ವ್ರತ ಆಚರಿಸುವವರಾಗಿದ್ದೇವೆ’ ಇದನ್ನು ಕೇಳಿ ಅಬು ಮುಸ್ಲಿಂ ಬಾಗ್ದಾದಿ ಗಳಗಳನೆ ಅತ್ತನು. ಮತ್ತು ನುಡಿದನು. ‘ಹೇ ಖಾಸಿಂ, ನೀನು ನಿಜವನ್ನೇ ನುಡಿದಿರುವೆ’ ಎಂದು ಹೇಳಿ ಊಟ ಮಾಡಿದನು. ಜತೆಗಿದ್ದ ಹಬೀಬ್ ಬಿನ್ ತಿರ್ಮಿಜಿ಼ಯು ಇದನ್ನು ಕೇಳಿ ಅತ್ತನು ತಿರ್ಮಿಜಿ಼ಯೂ ಸಹ ಹೊಟ್ಟೆ ತುಂಬಾ ಉಂಡನು. ಊಟದ ಹಾಸನ್ನು ಮಡಿಚಿದಾಗ ಪರಿಚಾರಿಕೆಯ ವೇಷದಲ್ಲಿ ಒಬ್ಬ ನರ್ತಕಿ ಬಂದಳು. ಆಕೆಯನ್ನು ಕಂಡು ನಾನು ಹೊರಡಲುನುವಾದೆ. ಅಬು ಮುಸ್ಲಿಂ ಬಾಗ್ದಾದಿಯು ಒತ್ತಾಯ ಮಾಡಿ, ಹೇ! ಸ್ನೇಹಿತನೆ ನಿಲ್ಲು, ಎಂದನು. ನಾನು ನುಡಿದೆ ‘ಹೇ! ಅಬು ಮುಸ್ಲಿಂ ಬಾಗ್ದಾಗಿ ಜಗತ್ತು ಹಗಲಾಗಿದೆ. ಹಾಗೂ ನಾವು ಅದರಲ್ಲಿ ಉಪವಾಸ ವ್ರತ ಆಚರಿಸುವವರಾಗಿದ್ದೇವೆ’ ಎಂದು ನುಡಿದು ಅಲ್ಲಿಂದ ಹೊರಟು ಬಂದೆ. ಆದರೆ ದೂರದವರೆಗೆ ಆ ಛಿನಾಲಿಯ ಹೆಜ್ಜೆಯ ಸಪ್ಪಳ ಹಾಗೂ ಗೆಜ್ಜೆಯ ಧ್ವನಿಯ ನನ್ನನ್ನು ಹಿಂಬಾಲಿಸುತ್ತಿತ್ತು. ನಾನು ಕಿವಿಯಲ್ಲಿ ಬೆರಳಿಟ್ಟು ಮುಂದೆ ಸಾಗಿದೆ.
ನಾನು ನನ್ನ ಕೋಣೆಯಲ್ಲಿ ಪಾದಾರ್ಪಣೆ ಮಾಡಿದಾಗ ಯಾವುದೋ ಜೀವಿ ನರಳಾಡಿ ನನ್ನ ಗಂಟಲಿAದ ಹೊರಬಂದಿತು. ನಾನು ದೀಪ ಹಚ್ಚಿದೆ. ಕೋಣೆಯ ಮೂಲೆಮೂಲೆಯಲ್ಲಿ ಹುಡುಕಿದೆ ಏನೂ ಕಂಡು ಬರಲಿಲ್ಲ. ನಿಸ್ಸಂಶಯವಾಗಿ ಇದು ನನ್ನ ಶಂಕೆಯಾಗಿತ್ತು. ನಾನು ಚಾಪೆಯ ಮೇಲೆ ಬಂದು ಮಲಗಿಕೊಂಡೆ. ಮರುದಿನ ಎದ್ದು ನಾನು ಹಬೀಬ್ ಬಿನ್ ಯಾಹ್ಯಾ ತಿರ್ಮಿಜಿ಼ಯ ಕಡೆ ಹೊರಟೆ. ಅವನ ಚಾಪೆಯ ಮೆಲೆ ಒಂದು ಹಳದಿ ನಾಯಿ ಮಲಗಿತ್ತು. ನಾನು ನುಡಿದೆ ‘ಹೇ ಯಾಹ್ಯಾನ ಪುತ್ರನೇ! ನೀನು ನಿನ್ನನ್ನು ಚಿತ್ತಕ್ಕೆ ಅರ್ಪಿಸಿಕೊಂಡಿದ್ದಿಯಾ? ಹಾಗೂ ನಯವಂಚಕನಾಗಿದ್ದೀಯಾ! ಇದನ್ನು ಕೇಳಿ ಅವನು ಅತ್ತನು ಹಾಗೂ ನುಡಿದನು. ‘ದೇವರಾಣೆ! ನಾನು ನಿನ್ನ ಜೊತೆಗಾರರಲ್ಲಿ ಒಬ್ಬನಾಗಿದ್ದೇನೆ. ಇತರ ಜೊತೆಗಾರರಿಗೆ ಶೇಖರ ಪಂಥ ತತ್ವಗಳ ನೆನಪು ಮಾಡಿಸಲು ಹೋಗುತ್ತೇನೆ’ ಆಗ ನಾನು ಶೇಖ್‌ರ ಸಮಾಧಿಗೆ- ದೇವರು ಅವರ ಗೋರಿಯ ಮೇಲೆ ಪ್ರಕಾಶವನ್ನು ಬೀರಲಿ- ಧನ ಸಂಪತ್ತು ಅರ್ಪಿಸುತ್ತಿರುವುದು ಕಂಡೆ.


ನಾನು ನುಡಿದೆ ಹೇ! ಯಾಹ್ಯಾನ ಪುತ್ರನೇ, ನಿನಗೆ ನಿಜಕ್ಕೂ ಕೆಡಕಾಗಲಿ, ನೀನು ಶೇಖ್‌ರನ್ನು ಅವರ ಮೃತ್ಯುವಿನ ಬಳಿಕ ಧನವಂತರನ್ನಾಗಿ ಮಾಡುತ್ತಿರುವಿ ಇಷ್ಟು ಸಂಪತ್ತನ್ನು ನೀನು ಏನು ಮಾಡುವಿಯಾ? ಹಬೀಬ್ ಬಿನ್ ತಿರ್ಮಿಜಿ಼ ಮತ್ತೆ ಅಳಹತ್ತಿದನು ಹಾಗೂ ನುಡಿದನು. ‘ದೇವರಾಣೆ! ಈ ಧನ ಸಂಪತ್ತು ಸಯ್ಯದ್ ರಜಿ಼, ಅಬು ಜಾಫರ್ ಶಿಕಾಜಿ, ಅಬು ಮುಸ್ಲಿಂ ಬಾಗ್ದಾದಿ, ಶೇಖ್ ಹಮ್ಜಾ ಹಾಗೂ ನನ್ನ ನಡುವೆ ಸಮಾನವಾಗಿ ಹಂಚಿಕೆಯಾಗುತ್ತದೆ. ನಾನು ನನ್ನ ಪಾಲನ್ನು ಬಡಬಗ್ಗರಲ್ಲಿ ಹಂಚುತ್ತೇನೆ ಹಾಗೂ ನುಡಿಯನ್ನೇ ನನ್ನ ಭಾಗ್ಯವೆಂದು ತಿಳಿಯುತ್ತೇನೆ.

-ಮುಂದುವರೆಯುವುದು

ಉರ್ದು ಮೂಲ: ಇಂತೆಜಾ಼ರ್ ಹುಸೇನ್
ಕನ್ನಡಕ್ಕೆ : ಬೋಡೆ ರಿಯಾಜ್ ಅಹ್ಮದ್

ಬೋಡೆ ರಿಯಾಝ್ ಅಹ್ಮದ್ ಮೂಲತಃ ಗುಲ್ಬರ್ಗದವರು. ವೃತ್ತಿಯಲ್ಲಿ ಸಾರಿಗೆ ಇಲಾಖೆಯಲ್ಲಿ ಕಚೇರಿ ಅಧೀಕ್ಷಕರಾಗಿರುವ ರಿಯಾಜ್ ಅಹ್ಮದ್ ಅವರು ಪ್ರವೃತ್ತಿಯಲ್ಲಿ ಸಾಹಿತ್ಯ-ಕಾವ್ಯ ಪ್ರೇಮಿ. ಇವರು ಬಿ.ಎಸ್ಸಿ ಪದವೀಧರರು. ಸೂಫೀ ಸಾಹಿತ್ಯಕ್ಕೆ ವಿಶೇಷವಾದ ಕೊಡುಗೆ ನೀಡಿರುವ ಪ್ರಮುಖ ಲೇಖಕರೂ ಹೌದು. ಲೇಖಕರ ತಂದೆಯವರು ಉರ್ದು ಕವಿಗಳಾಗಿದ್ದರು. ಗಿರಿನಾಡು ಸೂಫೀ ಪರಂಪರೆ, ಮನ್-ಲಗನ್, ಪ್ರೇಮ ಸೂಫಿ ಬಂದೇ ನವಾಝ್, ಇಂದ್ರಸಭಾ (ನಾಟಕ) ಪ್ರಕಟಿತ ನಾಲ್ಕು ಪ್ರಮುಖ ಕೃತಿಗಳು. ಅಲ್ಲದೇ ಇಂಗ್ಲೀಷ್, ಪರ್ಷಿಯನ್, ಉರ್ದು ಸಾಹಿತ್ಯದ ಮೇಲೆ ವಿಶೇಷವಾದ ಹಿಡಿತ ಇರುವ ಲೇಖಕರು ಆ ಭಾಷೆಗಳಿಂದ ಹಲವು ಕವಿತೆ, ಲೇಖನಗಳನ್ನು ಕನ್ನಡಕ್ಕೆ ತಂದಿದ್ದಾರೆ.

Leave a Reply

*