ಶೂನ್ಯತೆಯ ಸುಗಂಧ: ಮರುಭೂಮಿಯ ಪರಿಮಳ ಹಾಗೂ ಸೂಫಿಗಳು

ಆಂಡ್ರ್ಯೂ ಹಾರ್ವಿ ತನ್ನ ‘ಪೆರ್ಫ್ಯೂಮ್ ಓಫ್ ದಿ ಡೆಸೆರ್ಟ್’ [ Perfume Of the desert] ಎಂಬ ಪುಸ್ತಕದಲ್ಲಿ ಒಂದು ಸೂಫೀ ಕಥೆಯನ್ನು ಬರೆಯುತ್ತಾರೆ. ಕಥೆ ಹೀಗಿದೆ…

ಒಂದು ಸಂಘ ಅರಬಿಗಳು ತನ್ನ ಅನುಯಾಯಿಗಳೊಂದಿಗೆ ಸವಾರಿ ಮಾಡುತ್ತಿದ್ದರು. ಗುರು ಧರ್ಮ ವಿಶ್ವಾಸಿಯೂ, ಮಹಾನ್ ವ್ಯಕ್ತಿಯೂ ಆಗಿದ್ದರು. ಅವರ ದೀರ್ಘ ಪ್ರಯಾಣವು ನಿರ್ಜನವಾದ ಹಳೇಯ ಕೋಟೆಯ ಬಳಿ ತಲುಪಿ, ಅಲ್ಲೇ ಠಿಕಾಣಿ ಹೂಡಿದರು.

ಕೋಟೆಯ ನಿರ್ಜನವಾದ ಕೋಣೆಗಳಿಗೆ ಹತ್ತಿ ಇಳಿದ ಯುವಕರು ಕಟ್ಟಡದ ನಿರ್ಮಾಣ ಸಂಯೋಜನೆಯ ಕುರಿತು ಅರಿಯಲು ಇಟ್ಟಿಗೆಗಳನ್ನು ತುಂಡರಿಸಿ ವಾಸನೆಯನ್ನು ನೋಡಿದರು. ಅವರಲ್ಲೊಬ್ಬ ವ್ಯಕ್ತಿ ಕರೆದು ಹೇಳಿದ; “ಈ ಮಣ್ಣಿನಲ್ಲಿ ಗುಲಾಬಿಯ ಹಾಗು ಕಿತ್ತಳೆಯ ಹೂವಿನ ಎಣ್ಣೆಯನ್ನು ಮಿಶ್ರಣ ಮಾಡಲಾಗಿದೆ”. ಮತ್ತೊಬ್ಬ ವ್ಯಕ್ತಿ ಉದ್ಗಾರದಿಂದ ಕರೆದು ಹೇಳಿದ; ನಾನಿಲ್ಲಿ ಜಾಸ್ಮೀನಿನ ಸುಗಂಧವನ್ನು ಘಮಿಸುತ್ತಿದ್ದೇನೆ. ಎಷ್ಟು ಸುಂದರವಿದು..!

ಗುರು ಏನೂ ಪ್ರತ್ಯುತ್ತರಿಸದೆ ದೂರದಿಂದ ಘಟನೆಯನ್ನು ಗಮನಿಸುತ್ತಿದ್ದರು. ಸಂಘದಿಂದ ಯುವಕನೊಬ್ಬ ಗುರುವಿನ ಬಳಿ ಬಂದು “ಪ್ರಿಯ ಗುರುವೇ…ತಮ್ಮ ಆಪ್ತ ಸುಗಂಧ ಯಾವುದು..?” ಎಂದು ಪ್ರಶ್ನಿಸಿದ. ಅವರು ಕಿರುನಗೆಯ ಬೀರಿ ನೇರ ಕೋಟೆಯ ಬಳಿ ತೆರಳಿ, ಮುರಿದು ಬಿದ್ದ ಒಂದು ಕಿಟಕಿಯ ಮೂಲಕ ಶೂನ್ಯ ಮರುಭೂಮಿಯ ಗಾಳಿಯಲ್ಲಿ ಕೈಯ್ಯ ತೇಲಾಡಿಸಿ, ಒಂದು ಹಿಡಿ ಗಾಳಿಯ ಕೈಯ್ಯಲ್ಲಾಗಿಸಿ ಮುಷ್ಟಿಹಿಡಿದರು.
ನಂತರ ಗುರುವು ತನ್ನ ಬಳಿ ಇದ್ದ ಯುವಕನೊಂದಿಗೆ ಹೇಳಿದರು; “ಇದರ ವಾಸನೆಯ ಘಮಿಸಿನೋಡು. ಜಗತ್ತಿನ ಅತೀ ಶ್ರೇಷ್ಠ ಕಂಪು ಮರುಭೂಮಿಯದ್ದು. ಕಾರಣ ಅದಕ್ಕೆ ವಾಸನೆಗಳಿಲ್ಲ, ಶೂನ್ಯತೆಯ ಸುಗಂಧವಾಗಿದೆ ಮರುಭೂಮಿಗಿರುವುದು”

ನಿಗೂಢತೆ ಹಾಗೂ ಸಂವೇದನೆಯ ಪರಿಮಳ

ವರ್ಷಗಳು ಹಲವು ಸವೆದ ನಂತರ ‘ಆಂಡ್ರ್ಯೂ ಹಾರ್ವಿ’ ತನ್ನ ಹಳೇಯ ಸೂಫೀ ಸ್ನೇಹಿತನ ಬಳಿ ಈ ಕಥೆಯ ಉದ್ದೇಶದ ಕುರಿತು ಕೇಳಿದರು. ಅವರು ಹೀಗೆ ವಿವರಿಸಿಕೊಟ್ಟರು; “ನನ್ನ ಪ್ರಕಾರ, ಸೂಫಿಗಳು, ಸೂಫಿಸಂತರ ಕುರಿತು ಚಿಂತಿಸುವಾಗೆಲ್ಲ ನಾನು ಮರುಭೂಮಿಯ ಕುರಿತು ಚಿಂತಿಸುವುದಿದೆ. ಅದರ ಸೌಂದರ್ಯ, ಭಯಾನಕತೆ, ಏಕಾಂತತೆ, ನಿಶ್ಯಬ್ಧತೆ ಇವೆಲ್ಲವೂ ನನ್ನ ಮನಸ್ಸಿಗೆ ಓಡೋಡಿ ಬರುತ್ತೆ. ಮರುಭೂಮಿಯಲ್ಲಿ ಹೇಗೆ ನಾವು ಸಂಪೂರ್ಣವಾಗಿ ಉನ್ಮೂಲನೆ ಮಾಡುವುದು, ನಮ್ಮ ಮೇಲ್ಭಾಗ ಹಾಗೂ ಸುತ್ತಮುತ್ತಲೂ ಇರುವ ವಸ್ತುಗಳ ಒಂದು ಭಾಗವಾಗುವುದು ಹೇಗೆ ಎಂದು ಚಿಂತಿಸುವುದಿದೆ. ನೀವು ಚಕ್ರವಾಳದ ಒಂದು ಭಾಗದಲ್ಲಿ ನಿಂತು ಶೂನ್ಯ, ನಿಶ್ಚಲವಾಗಿ ನಿಂತಿರುವ ಮರಳಿನ ಹಾಗೂ ಆಕಾಶದ ಭಾಗವಾಗಿ ಪ್ರತ್ಯೇಕವಾಗುವಂತಹ ಒಂದು ಅನುಭವವಿದು.”

“ಅಲ್ಲಾಹನ ಅಸ್ತಿತ್ವ ಹೊರತು ಎಲ್ಲವೂ ನಶಿಸುವುದು” ಎಂಬ ಖುರ್-ಆನಿನ ಸೂಕ್ತದ ಕುರಿತು ನಾನು ಆಲೋಚಿಸುವುದಿದೆ. ಈ ಮರುಭೂಮಿ ಅಲ್ಲಾಹನ ಅಸ್ತಿತ್ವದ ಪ್ರತೀಕ. ಮನುಷ್ಯ ಅವನ ಶೂನ್ಯತೆಯನ್ನು, ದೇವರ ಸಂಪೂರ್ಣವಾದ ಶೋಭೆಯನ್ನು ದರ್ಶಿಸುವ ಕನ್ನಡಿಯದು. ಮರುಭೂಮಿಯ ಕನ್ನಡಿಗೆ ಕಣ್ಣುನೆಟ್ಟು ಜೀವನವನ್ನು ಕಳೆಯುವವರು ಸೂಫಿಗಳು, ಅಲ್ಲದೆ ಈ ಮರುಭೂಮಿಯ ಮಹತ್ವ, ಪರಿಶುದ್ಧತೆಯನ್ನು ಸ್ವ-ಜೀವನದಲ್ಲಿ ಆವಾಹಿಸಿಕೊಂಡವರೇ ಸೂಫಿಗಳು.

ಶ್ರೇಷ್ಠ ಸೂಫೀ ತತ್ವಚಿಂತಕರಲ್ಲಿ ಹಾಗೂ ಕವಿಗಳಲ್ಲಿ, ‘ಜಗತ್ತಿನ ಅತೀ ಶ್ರೇಷ್ಠ ಸುಗಂಧ’ ಎಂದು ಕಥೆಯಲ್ಲಿ ಗುರು ಹೇಳಿದ ಸುಗಂಧವನ್ನು ನಮಗೆ ಅನುಭವಿಸಲು ಸಾಧ್ಯ. ಮರುಭೂಮಿಯ ಸುಗಂಧ, ಶೂನ್ಯತೆಯ ಸುಗಂಧ, ಶ್ರೇಷ್ಟ ಸಾನಿಧ್ಯದ ಉಲ್ಲಾಸಕರವಾದ ಗಂಧ, ನಿತ್ಯವೂ ಶೂನ್ಯತೆಯ, ಉನ್ಮಾದದ ವಾತಾವರಣ ಈ ಮರುಭೂಮಿಯದು.

ಆಂಡ್ರ್ಯೂ ಹಾರ್ವಿ

ಕಥೆಯಲ್ಲಿ ಬರುವ ಮುರಿದ ಕಟ್ಟಡ ಈ ಜಗತ್ತನ್ನು ಸೂಚಿಸುತ್ತದೆ. ಅದರಲ್ಲಿರುವ ಎಲ್ಲಾ ವಿನೋದ, ಬಯಕೆ, ಸಂಪ್ರದಾಯಗಳೆಲ್ಲವೂ ಸುರಭಿಯಾದ ಇಚ್ಛೆಗಳಿಂದಾಗಿದೆ ನಿರ್ಮಿಸಲ್ಪಟ್ಟಿರುವುದು.

ಟಿ.ಎಸ್ ಏಲಿಯಟ್ ಅವರ ಒಂದು ಗೆರೆ ನೆನಪಿಗೆ ಬರುತ್ತಿದೆ; ಒಬ್ಬ ವೃದ್ಧನ ಅಂಗಿಯ ಕೈಯ್ಯಲ್ಲಿರುವ ಬೂದಿ, ಒಣಗಿದ ಗುಲಾಬಿ ಹೂವಿನ ಬೂದಿಯಾಗಿದೆ.

ಜಗತ್ತಿನ ಎಲ್ಲಾ ಸಂತೋಷಗಳು ಎಷ್ಟು ಚಂದವಾದರೂ ಅವುಗಳು ಕಳೆದುಹೋಗುವಂತದ್ದು. ದೀರ್ಘ ಕಾಲ ಅದಕ್ಕೆ ನೆಲೆನಿಲ್ಲಲು ಸಾಧ್ಯವಿಲ್ಲ. ಆದರೆ ಅನಂತವಾದ ಗಂಧವು ಶೂನ್ಯತೆ ಹಾಗೂ ದೇವರದ್ದಾಗಿದೆ. ಆ ಸುಗಂಧವನ್ನು, ನಿಗೂಢತೆ, ಉಲ್ಲಾಸ, ಪರಮಾವಧಿಯ ಸಂತೋಷವನ್ನು ಅನುಭವಿಸುವುದಾಗಿದೆ ಸೂಫಿಗಳ ಲಕ್ಷ್ಯ. ಆ ಗಂಧ ತಮ್ಮ ಪ್ರಿಯನಲ್ಲಿ ಉನ್ಮಾದವುಂಟಾಗಿಸಿ, ಅವನಲ್ಲಿ ಲೀನವಾಗಿಸಲು ಅವರಿಗೆ ಅರಿವಿದೆ.

ಒಮ್ಮೆ ನೀವು ಆ ಸುಗಂಧವ ಅನುಭವಿಸಿದರೆ, ನಿಮ್ಮ ಜೀವನ ನಾಶವಾಗಿ ಹೋಗುವುದಂತೂ ಸತ್ಯ. ಅದರೊಂದಿಗೆ ನಿನಗೆ ಇನ್ನೆಂದೂ ಸುಗಂಧವ ಅನುಭವಿಸದೇ ಇರದಂತಾಗುವುದು. ನಿಮ್ಮ ಬಳಿ ಇರುವ ಉದ್ವೇಗ-ಉಮ್ಮಳಗಳು ಆ ವಾಸನೆಗೆ ಅಚಲವಾದ ಬಯಕೆಯಾಗಿ ಬಾಕಿಯಾಗುವುದು.

ಅಪೂರ್ವ ಸುಗಂಧ, ಮಧುರವಾದ ಲಹರಿ

ನಾನು ಮಳೆಯ ಕನಸು ಕಾಣುವೆ
ಮರುಭೂಮಿಯ ಮರಳಲ್ಲಿನ ಹೂದೋಟದ ಕುರಿತು
ಕನಸು ಕಾಣುವೆ

ನಾನು ಸುಮ್ಮನೆ ಎದ್ದು
ಸಮಯವು ನನ್ನ ಮುಂದೆಯೇ ಸಾಗುವಾಗ
ನಾನು ಪ್ರೀತಿಯ ಕುರಿತು ಕನಸು ಕಾಣುವೆ

ನಾನು ಅಗ್ನಿಜ್ವಾಲೆಯ ಕನಸು ಕಾಣುವೆ
ಆ ಕಣಸು ಒಮ್ಮೆಯೂ ಬಳಲದ
ಕುದುರೆಯೊಂದಿಗೆ ಬೇಡಿ ಹಾಕಿಸಿಕೊಂಡಿದೆ

ಆ ಅಗ್ನಿಜ್ವಾಲೆಯಲ್ಲಿ
ಅವರು ನೆರಳುಗಳು ಪುರುಷನ
ಮೋಹದ ಆಕೃತಿಯಂತೆ ನರ್ತಿಸುತ್ತಿದೆ

ಈ ಮರುಭೂಮಿಯ ಗುಲಾಬಿ ಹೂವು,
ಇಷ್ಟೂ ಮಧುರವುಳ್ಳ ಸುಗಂಧ ದ್ರವ್ಯಗಳೊಂದೂ
ನನ್ನ ಆಕರ್ಷಿಸಲಿಲ್ಲ

ನಾನು ಮಳೆಯ ಕನಸು ಕಾಣುವೆ
ನಿರ್ಜನ ಆಕಾಶಕ್ಕೆ ನಾನು
ನನ್ನ ಕಣ್ಣ ನೆಗೆಯಿಸುವೆ

ನಾನು ಕಣ್ಣ ಮುಚ್ಚುತ್ತಿರುವೆ
ಈ ಅಪೂರ್ವ ಸುಗಂಧ ದ್ರವ್ಯವೇ
ಅವರ ಪ್ರಣಯದ ಉನ್ಮಾದ

ಸುಂದರ ಮರುಭೂಮಿಯ ಗುಲಾಬಿ ಹೂ
ಈ ತೋಟದಲ್ಲಿನ ನೆನಪುಗಳು
ನಮ್ಮ ಭೇಟೆಯಾಡುತಿದೆ

ಈ ಮರುಭೂಮಿಯ ಕುಸುಮ
ಈ ಅಪೂರ್ವ ಸುಗಂಧವು ಪತನದ
ಸಿಹಿಯೇರುವ ಲಹರಿ.

ಮೂಲ: ಸ್ವಾದಿಖ್
ಭಾವಾನುವಾದ: ಸಲೀಂ ಇರುವಂಬಳ್ಳ

Leave a Reply

*